ಮುಳ್ಳುಗಳು ಹೂವಾಗಿ ಅರಳಬೇಕು

ಓ ನೋಡು ಮಾನವತೆ ನೀ ಕಾಣು ದಾನವತೆ
ಕಣ್ದೋರು ಕರುಣೆಯಿಂ ವಿಜಯೇಶನೆ
ಕೊನೆಯಿಲ್ಲವೇ ತಂದೆ ಕತ್ತಲೆಯ ಕಾಳಕ್ಕೆ
ತಾಳ ತಪ್ಪಿದೆಯಯ್ಯ ಸೂತ್ರಧರನೆ

ಪ್ರೇಮದಿಂ ನೀ ತಾಯಿ ಯೋಗದಿಂ ನೀ ತಂದಿ
ತೂಗು ತೊಟ್ಟಿಲದಲ್ಲಿ ತುಂಬಿ ತೂಗೈ
ಸಾಕು ಬಿಸಿಲಿನ ಹಲಿಗೆ ಬೇಕು ಜೋಗುಳ ಸಲಿಗೆ
ಆತ್ಮ ಜ್ಞಾನದ ಶಿಖರ ಏರಬೇಕೈ

ಪ್ರೀತಿಯೇ ಸಿದ್ಧಾಂತ ರೀತಿಯೇ ಆಧ್ಯಾತ್ಮ
ಶಾಂತಿಯೇ ಶಿವಧರ್ಮ ಸತ್ಯಧರ್ಮ
ದೇಹ ಧರ್ಮವೆ ವರ್ಣ ಸ್ವೈರ ಕರ್ಮವೇ ವರ್ಗ
ಕಾರ್ಮೋಡ ಕರ್ಬೊಗೆಯೆ ವಿಶ್ವಚೂರ್ಣ

ಕಬ್ಬಿಣವೆ ಕಲಿಯುಗವು ಶಿವಯುಗವೆ ಬಂಗಾರ
ಮುಳ್ಳುಗಳು ಹೂವಾಗಿ ಅರಳಬೇಕು
ಹೊಸಯುಗದ ಶಂಕರನೆ ಓ ವಿಜಯ ಝೇಂಕರನೆ
ಝೇಂಕರಿಸು ಠೇಂಕರಿಸು ಠೀವಿಯಿಂದ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಂದೂಕು
Next post ಮುಖಗಳು

ಸಣ್ಣ ಕತೆ

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

cheap jordans|wholesale air max|wholesale jordans|wholesale jewelry|wholesale jerseys